Tag Archives: download bhavageete mp3
ಹೊಸ ಬಗೆಯಲಿ ಬರಲಿ / hosa bageyali barali
ಹೊಸ ಬಗೆಯಲಿ ಬರಲಿ
ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ತುಳಿದು ಆಳಲಾಗದಂಥ ಬಾಳಿಗೆ
ಕಣ್ಣೆರಡೂ ಉರಿವ ದೀಪಸ್ಥಂಭ
ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಬಾ ಬಾ ಓ ಬೆಳಕೇ / baa baa o belake
click to play
[audio http://cl.ly/1l0e2I1M3v41/Baa_Baa_O_Belake.mp3]ಬಾ ಬಾ ಓ ಬೆಳಕೇ
ಕರುಣಿಸಿ ಇಳಿ ನೆಲಕೆ
ನೀನಿಲ್ಲದೆ ಬಾಳೆಲ್ಲಿದೆ
ಹೋಳಾಗಿದೆ ಬದುಕಿಲ್ಲಿ ।।
ಕಾಡು ಕಡಲು ಬಾನು
ಏನಿದ್ದೂ ಏನು
ಮೈಯೆಲ್ಲಿದೆ ಇಡಿ ಭುವಿಗೆ
ಕಾಣಿಸದಿರೆ ನೀನು ।। ಬಾ ।।
ನಿನ್ನ ಕೃಪಾಚರಣ
ಚಾಚಿ ತನ್ನ ಕಿರಣ
ಸೋಕಿದೊಡನೆ ಸಂಚರಿಸಿದೆ
ನೆಲದೆದೆಯಲಿ ಹರಣ ।। ಬಾ ।।
ಬಾಂದಳದಾ ತಿಲಕವೇ
ವಿಶ್ವದೆದೆಯ ಪದಕವೇ
ನಿನ್ನೊಳಗಿನ ಸತ್ಯ ತೋರು
ಬಂಗಾರದ ಫಲಕವೇ ।। ಬಾ ।।
ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ – ಸುಲೋಚನ
ನಲ್ಲೆ ನಿನ್ನ ಮರೆಯಲು / nalle ninna mareyalu
click to play
[audio http://cl.ly/0J2b1K3e2o26/nalle_ninna_mareyalu.mp3]ನಲ್ಲೆ ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ
ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ ।। ನಲ್ಲೆ ।।
ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಳಿದೆ
ದುಃಖದ ಮಡು ಮಾತಿಲ್ಲದೆ ಮೌನ ತಾಳಿದೆ ।। ನಲ್ಲೆ ।।
ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ / ಗಾಯನ – ಸಿ ಅಶ್ವಥ್
ನಿನ್ನ ನೀತಿ ಅದಾವ ದೇವರಿಗೆ / ninna neeti adaava devarige
click to play
[audio http://cl.ly/0Y2O343G1W1T/ninna_neeti_adaava_devarige.mp3]ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ನೀನೇ ಸರಿ ಅನ್ನಬೇಕು
ಪ್ರೀತಿಗಾಗಿಯೇ ಎಲ್ಲ ತೆತ್ತ ಜೀವವನು
ಈ ರೀತಿ ಕಾಡುವುದು ಸಾಕು ।। ನಿನ್ನ ।।
ಏಕಾಂತವೆನ್ನುವುದು ಎಲ್ಲಿ ನನಗೀಗ
ಎದೆಯಲೇ ಮನೆಯಾ ಹೂಡಿರುವೆ
ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೋ
ನಿನ್ನದೆ ನಾಮ ಜಪ ನನಗೆ ।। ನಿನ್ನ ।।
ನಿನ್ನ ಕಾಣುವ ಮುನ್ನ ಏನೆಲ್ಲ ಆಸೆಗಳು
ಏನೆಲ್ಲ ಕನಸಿತ್ತು ನನಗೆ
ಎಲ್ಲಾ ತೀರಿತು ನಿನ್ನ ಧ್ಯಾನವೊಂದೆ ಈಗ
ಕಿಚ್ಚಾಗಿ ಒಗ್ಗುತಿದೆ ಒಳಗೆ ।। ನಿನ್ನ ।।
ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು
ಶರಣಾದ ಜೀವಕ್ಕೆ ಮರುಗಿ ಸಂತೈಸದೆ
ದೂರವಾದರೆ ಹೇಗೆ ಒಲವು ।। ನಿನ್ನ ।।
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್
download ninna neeti adaava devarige
ಸಂಜೆ ಬಾನಿನಂಚಿನಲ್ಲಿ / sanje baaninanchinalli
click to play
[audio http://cl.ly/251m0Q2N1400/sanje_baaninalli.mp3]ಸಂಜೆ ಬಾನಿನಂಚಿನಲ್ಲಿ
ಬಿದ್ದ ಬಿದಿಗೆ ಚಂದಿರ
ಶಚೀ ತೀರ್ಥದಾಳದಲ್ಲಿ
ಶಕುಂತಲೆಯ ಉಂಗುರ ।। ಸಂಜೆ ।।
ದೂರ್ವಾಸರ ಶಾಪವಿಗೋ
ಕವಿಯುತಿಹುದು ಸುತ್ತಲೂ
ಕಂಡುದೆಲ್ಲ ಜಾರುತಿಹುದು
ಮೆಲ್ಲನಿರುಳ ತಮದೊಳು ।। ಸಂಜೆ ।।
ಅಸಹಾಯಕ ತಾರೆಬಳಗ
ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು
ಉಕ್ಕಿ ಬರುವ ದುಃಖವ ।। ಸಂಜೆ ।।
ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್
download sanje baaninanchinalli
ಯಾರಿಗುಂಟು ಯಾರಿಗಿಲ್ಲ / yaariguntu yaarigilla
click to play
[audio http://cl.ly/3u1n2a1I0N3H/yaariguntu_yaarigilla.mp3]ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ನೀಸಬೇಕಯ್ಯ ಗೆಣೆಯ
ಕಾಣದ್ದಕ್ಕೆ ಚಿಂತೆ ಯಾಕಯ್ಯ,
ಗೋಣು ಹಾಕಿ ಕೂಡ ಬ್ಯಾಡ ಗತ್ತಿನಾಗೆ ಬಾಳ ನೋಡ ।। ಯಾರಿಗುಂಟು ।।
ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗ ಬೇಕಯ್ಯ ಓ ಗೆಣೆಯ
ಕೈಯ ಚೆಲ್ಲಿ ಕೊರಗ ಬೇಡಯ್ಯ ।। ಗೋಣು ।।
ಪ್ರೀತಿ ಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ ಓ ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ ।। ಗೋಣು ।।
ಸಾಹಿತ್ಯ – ದೊಡ್ಡರಂಗೇಗೌಡ
ಸಂಗೀತ – ಸಿ ಅಶ್ವಥ್
ಗಾಯನ – SPB
download yaariguntu yaarigilla
ಯಾರ ಹಾಡ ಕೊರಳಾಗಿ / yaara haada koralaagi
click to play
ಯಾರ ಹಾಡ ಕೊರಳಾಗಿ ಒಳ ದನಿಯ ಮರೆತೇನೋ
ಯಾರ ವೀಣೆ ಬೆರಳಾಗಿ ಅಪಸ್ವರವ ಮಿಡಿದೇನೋ ।।
ಯಾವ ವೇಷ ತೊಟ್ಟು ನಾನು ರಂಗದಲ್ಲಿ ಕುಣಿದೇನೋ
ಯಾವ ಗೆಜ್ಜೆ ನಾದಕಾಗಿ ಪಾದವನ್ನೇ ತೆತ್ತೇನೋ ।। ಯಾರ ।।
ಯಾವ ಜೀವ ಬೆಳಗಲೆಂದು ದೀಪವಾಗಿ ಉರಿದೇನೋ
ಯಾರ ಪಯಣ ಸಾಗಲೆಂದು ಹಾದಿಯಾಗಿ ಹರಿದೇನೋ ।। ಯಾರ ।।
ಯಾರ ಕನಸ ಕಟ್ಟ ಹೋಗಿ ಬಣ್ಣಗೆಟ್ಟು ನಿಂತೇನೋ
ಎದೆಯ ನೋವು ಹಾಡಾಗದೆ ಬರಿಯ ಶಬ್ಧವಾದೇನೋ ।। ಯಾರ ।।
ಸಾಹಿತ್ಯ – M R ಕಮಲ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
download yaara haada koralaagi
ಮಾಡು ಸಿಕ್ಕದಲ್ಲಾ / maadu sikkadalla
click to play
ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ
ಜೋಡು ಹೆಂಡರಂಜಿ ಓಡಿ ಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ ।। ಮಾಡು ।।
ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ ।। ಮಾಡು ।।
ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ
ದೊಪ್ಪನೆ ಬಿತ್ತಲ್ಲ ।। ಮಾಡು ।।
ಯೋಗವು ಬಂದಲ್ಲ ಬದುಕು ವಿಭಾಗವಾಯಿತಲ್ಲ
ಭೋಗಿಶಯನ ಶ್ರೀ ಪುರಂದರ ವಿಠಲನ
ಆಗ ನೆನೆಯಲಿಲ್ಲ ।। ಮಾಡು ।।
ಸಾಹಿತ್ಯ – ಪುರಂದರದಾಸರು
ಸಂಗೀತ / ಗಾಯನ – P ಕಾಳಿಂಗ ರಾವ್
ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ / yelliruve kaanisade kareva korale
click to play
ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ
ಎಲ್ಲಿರುವೆ ಹೇಳು ನೀ ನಿಜವೆ ನೆರಳೆ ।।
ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರು
ಎಸೆದ ಕೋಗಿಲೆಯ ದನಿ ಹರಳಿನಂತೆ || ಎಲ್ಲಿರುವೆ ।।
ನಿನಗೆಂದೆ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ
ಓಡಿ ಬಂದೆನು ಇಗೋ ಪರಿವೆ ಇರದೇ
ಓಡಿ ಬರುವಂತೆ ನದಿ ಕಡಲ ಕರೆಗೆ || ಎಲ್ಲಿರುವೆ ।।
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
download yelliruve kaanisade kareva korale
ಯಾವುದೀ ಹೊಸ ಸಂಚು/yaavudee hosa sanchu
click to play
You must be logged in to post a comment.