click to play
ಇಂದು ಕೆಂದಾವರೆಯ ದಳ
ದಳಿಸಿ ದಾರಿಯಲಿ ಗಂಧದೌತಣ
ಹೋಗಿ ಬರುವ ಜನಕೆ
ಮಂದ ಮಾರುತವಿರಲಿ ಮರಿ
ದುಂಬಿ ಇರಲಿ ಆನಂದವಿರೆ
ಅತಿಥಿಗಳ ಕರೆಯಬೇಕೆ || ಇಂದು ||
ನಗುತಲಿದೆ ನೀರು ಹೊಂಬಿಸಿಲು
ಕಚಗುಳಿ ಇಡಲು
ದುಂಬಿಗಳು ಒಲವನೆ ಗುಂಜಿಸಿರಲು
ನಾಚಿ ತಲೆ ಬಾಗಿಸಿತು ಕಮಲ
ದೂರದ ಬಾನದಾರಿಯಲಿ
ಸಪ್ತಾಷ್ವವೇರಿ ಬಹನು || ಇಂದು ||
ತನ್ನ ಕೈ ಕೈಯೊಳು
ಒಲವು ಬಲೆಗಳನಿಟ್ಟು
ನೀರಿನಾಳದೊಲವನು ಬಿಂಬಿಸುವನು
ಮೈ ಮರೆತುದಾ ಪದ್ಮ
ಪರಮೇಗಳಾ ಪರಿವಾರ
ಮಂಜಾಗಿ ಕರಗಿತ್ತು ಸುತ್ತ ಮುತ್ತ || ಇಂದು ||
ಇರುವ ದುಂಬಿಯ ಬಿಟ್ಟು
ಬರುವ ನೇಸರ ಕರೆಗೆ
ಓಗುಟ್ಟುದೆನ್ನ ಕೆಂದಾವರೆ
ಬರುವ ಬಾಳಿನ ಕನಸು
ರವಿಯಾಗಿ ಬಹುದೇನು
ಕಾಯಬೇಕು ಅದಕೆ ಎಲ್ಲಿವರೆಗೆ || ಇಂದು ||
ಸಾಹಿತ್ಯ – ಎಂ.ಗೋಪಾಲಕೃಷ್ಣ ಅಡಿಗ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಮಂಜುಳಾ ಗುರುರಾಜ್
Anushree Hegde
ಡಿಸೆಂಬರ್ 14, 2014 at 4:41 ಅಪರಾಹ್ನ
thank you…. 🙂