RSS

ಇಂದು ಕೆಂದಾವರೆಯ / indu kendavareya

22 ಏಪ್ರಿಲ್

click to play

ಇಂದು ಕೆಂದಾವರೆಯ ದಳ
ದಳಿಸಿ ದಾರಿಯಲಿ ಗಂಧದೌತಣ
ಹೋಗಿ ಬರುವ ಜನಕೆ
ಮಂದ ಮಾರುತವಿರಲಿ ಮರಿ
ದುಂಬಿ ಇರಲಿ ಆನಂದವಿರೆ
ಅತಿಥಿಗಳ ಕರೆಯಬೇಕೆ || ಇಂದು ||

ನಗುತಲಿದೆ ನೀರು ಹೊಂಬಿಸಿಲು
ಕಚಗುಳಿ ಇಡಲು
ದುಂಬಿಗಳು ಒಲವನೆ ಗುಂಜಿಸಿರಲು
ನಾಚಿ ತಲೆ ಬಾಗಿಸಿತು ಕಮಲ
ದೂರದ ಬಾನದಾರಿಯಲಿ
ಸಪ್ತಾಷ್ವವೇರಿ ಬಹನು || ಇಂದು ||

ತನ್ನ ಕೈ ಕೈಯೊಳು
ಒಲವು ಬಲೆಗಳನಿಟ್ಟು
ನೀರಿನಾಳದೊಲವನು ಬಿಂಬಿಸುವನು
ಮೈ ಮರೆತುದಾ ಪದ್ಮ
ಪರಮೇಗಳಾ ಪರಿವಾರ
ಮಂಜಾಗಿ ಕರಗಿತ್ತು ಸುತ್ತ ಮುತ್ತ || ಇಂದು ||

ಇರುವ ದುಂಬಿಯ ಬಿಟ್ಟು
ಬರುವ ನೇಸರ ಕರೆಗೆ
ಓಗುಟ್ಟುದೆನ್ನ ಕೆಂದಾವರೆ
ಬರುವ ಬಾಳಿನ ಕನಸು
ರವಿಯಾಗಿ ಬಹುದೇನು
ಕಾಯಬೇಕು ಅದಕೆ ಎಲ್ಲಿವರೆಗೆ || ಇಂದು ||

ಸಾಹಿತ್ಯ – ಎಂ.ಗೋಪಾಲಕೃಷ್ಣ ಅಡಿಗ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಮಂಜುಳಾ ಗುರುರಾಜ್

download indu kendavareya

 

ಟ್ಯಾಗ್ ಗಳು: , , , , ,

1 responses to “ಇಂದು ಕೆಂದಾವರೆಯ / indu kendavareya

  1. Anushree Hegde

    ಡಿಸೆಂಬರ್ 14, 2014 at 4:41 ಅಪರಾಹ್ನ

    thank you…. 🙂