Tag Archives: download mp3
ಹೊಸ ಬಗೆಯಲಿ ಬರಲಿ / hosa bageyali barali
ಹೊಸ ಬಗೆಯಲಿ ಬರಲಿ
ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ತುಳಿದು ಆಳಲಾಗದಂಥ ಬಾಳಿಗೆ
ಕಣ್ಣೆರಡೂ ಉರಿವ ದೀಪಸ್ಥಂಭ
ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ / gudi charchu masajeedigala bittu
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ ।। ಗುಡಿ||
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ ।। ಗುಡಿ ।।
ಸಾಹಿತ್ಯ – ಕುವೆಂಪು
ಸಂಗೀತ – ಸಿ ಅಶ್ವಥ್
ಗಾಯನ – ವೈ ಕೆ ಮುದ್ದುಕೃಷ್ಣ
download gudi charchu masajeedigala bittu horabanni
ಅಮ್ಮ ಹಚ್ಚಿದೊಂದು ಹಣತೆ / amma hachidondu hanate
click to play
[audio http://cl.ly/1g1I0n2M3B2N/amma_hachidondu_hanate.mp3]ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ ।।
ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು
ದೂರದಲ್ಲಿ ತೀರವಿದೆ
ಎಂದು ತೋರಲು ।। ಅಮ್ಮ ।।
ಕೃತಕ ದೀಪ ಕತ್ತಲಲ್ಲಿ
ಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ ।। ಅಮ್ಮ ।।
ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ತುಂಬಲು
ಮಿಡಿದ ಹಾಗೆ ವೀಣೆ ।। ಅಮ್ಮ ।।
ಬಾ ಬಾ ಓ ಬೆಳಕೇ / baa baa o belake
click to play
[audio http://cl.ly/1l0e2I1M3v41/Baa_Baa_O_Belake.mp3]ಬಾ ಬಾ ಓ ಬೆಳಕೇ
ಕರುಣಿಸಿ ಇಳಿ ನೆಲಕೆ
ನೀನಿಲ್ಲದೆ ಬಾಳೆಲ್ಲಿದೆ
ಹೋಳಾಗಿದೆ ಬದುಕಿಲ್ಲಿ ।।
ಕಾಡು ಕಡಲು ಬಾನು
ಏನಿದ್ದೂ ಏನು
ಮೈಯೆಲ್ಲಿದೆ ಇಡಿ ಭುವಿಗೆ
ಕಾಣಿಸದಿರೆ ನೀನು ।। ಬಾ ।।
ನಿನ್ನ ಕೃಪಾಚರಣ
ಚಾಚಿ ತನ್ನ ಕಿರಣ
ಸೋಕಿದೊಡನೆ ಸಂಚರಿಸಿದೆ
ನೆಲದೆದೆಯಲಿ ಹರಣ ।। ಬಾ ।।
ಬಾಂದಳದಾ ತಿಲಕವೇ
ವಿಶ್ವದೆದೆಯ ಪದಕವೇ
ನಿನ್ನೊಳಗಿನ ಸತ್ಯ ತೋರು
ಬಂಗಾರದ ಫಲಕವೇ ।। ಬಾ ।।
ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ – ಸುಲೋಚನ
ಇದಾವ ರಾಗ ಮತ್ತೆ / idaava raaga mathe
click to play
[audio http://cl.ly/040R0g1L1I2t/idaava_raaga.mp3]ಇದಾವ ರಾಗ ಮತ್ತೆ ಇದಾವ ರಾಗ
ಎದೆಯಾಳದಿಂದೆದ್ದು ನಭನೀಲಿಗೇರುತಿದೆ
ಯುಗ ಯುಗಾಂತರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೂರುತಿದೆ
ಬಗೆಯ ಬಾನ್ಬಯಲಿನಲಿ ಮೋಡಗಳ ಕವಿಸುತಿದೆ ।। ಇದಾವ ।।
ಹಚ್ಚಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝಮ್ಮೆಂದು ನಡುಗಿಸಿದೆ
ಸುಪ್ತಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ
ಹಣೆಯ ಬರಹವನೊರೆಸಿ ಬೇರೊಂದ ಬರೆಯುತಿದೆ ।। ಇದಾವ ।।
ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
ಸಂಜೆ ಬಾನಿನಂಚಿನಲ್ಲಿ / sanje baaninanchinalli
click to play
[audio http://cl.ly/251m0Q2N1400/sanje_baaninalli.mp3]ಸಂಜೆ ಬಾನಿನಂಚಿನಲ್ಲಿ
ಬಿದ್ದ ಬಿದಿಗೆ ಚಂದಿರ
ಶಚೀ ತೀರ್ಥದಾಳದಲ್ಲಿ
ಶಕುಂತಲೆಯ ಉಂಗುರ ।। ಸಂಜೆ ।।
ದೂರ್ವಾಸರ ಶಾಪವಿಗೋ
ಕವಿಯುತಿಹುದು ಸುತ್ತಲೂ
ಕಂಡುದೆಲ್ಲ ಜಾರುತಿಹುದು
ಮೆಲ್ಲನಿರುಳ ತಮದೊಳು ।। ಸಂಜೆ ।।
ಅಸಹಾಯಕ ತಾರೆಬಳಗ
ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು
ಉಕ್ಕಿ ಬರುವ ದುಃಖವ ।। ಸಂಜೆ ।।
ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್
download sanje baaninanchinalli
ಯಾರಿಗುಂಟು ಯಾರಿಗಿಲ್ಲ / yaariguntu yaarigilla
click to play
[audio http://cl.ly/3u1n2a1I0N3H/yaariguntu_yaarigilla.mp3]ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ನೀಸಬೇಕಯ್ಯ ಗೆಣೆಯ
ಕಾಣದ್ದಕ್ಕೆ ಚಿಂತೆ ಯಾಕಯ್ಯ,
ಗೋಣು ಹಾಕಿ ಕೂಡ ಬ್ಯಾಡ ಗತ್ತಿನಾಗೆ ಬಾಳ ನೋಡ ।। ಯಾರಿಗುಂಟು ।।
ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗ ಬೇಕಯ್ಯ ಓ ಗೆಣೆಯ
ಕೈಯ ಚೆಲ್ಲಿ ಕೊರಗ ಬೇಡಯ್ಯ ।। ಗೋಣು ।।
ಪ್ರೀತಿ ಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ ಓ ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ ।। ಗೋಣು ।।
ಸಾಹಿತ್ಯ – ದೊಡ್ಡರಂಗೇಗೌಡ
ಸಂಗೀತ – ಸಿ ಅಶ್ವಥ್
ಗಾಯನ – SPB
download yaariguntu yaarigilla
ಯಾರ ಹಾಡ ಕೊರಳಾಗಿ / yaara haada koralaagi
click to play
ಯಾರ ಹಾಡ ಕೊರಳಾಗಿ ಒಳ ದನಿಯ ಮರೆತೇನೋ
ಯಾರ ವೀಣೆ ಬೆರಳಾಗಿ ಅಪಸ್ವರವ ಮಿಡಿದೇನೋ ।।
ಯಾವ ವೇಷ ತೊಟ್ಟು ನಾನು ರಂಗದಲ್ಲಿ ಕುಣಿದೇನೋ
ಯಾವ ಗೆಜ್ಜೆ ನಾದಕಾಗಿ ಪಾದವನ್ನೇ ತೆತ್ತೇನೋ ।। ಯಾರ ।।
ಯಾವ ಜೀವ ಬೆಳಗಲೆಂದು ದೀಪವಾಗಿ ಉರಿದೇನೋ
ಯಾರ ಪಯಣ ಸಾಗಲೆಂದು ಹಾದಿಯಾಗಿ ಹರಿದೇನೋ ।। ಯಾರ ।।
ಯಾರ ಕನಸ ಕಟ್ಟ ಹೋಗಿ ಬಣ್ಣಗೆಟ್ಟು ನಿಂತೇನೋ
ಎದೆಯ ನೋವು ಹಾಡಾಗದೆ ಬರಿಯ ಶಬ್ಧವಾದೇನೋ ।। ಯಾರ ।।
ಸಾಹಿತ್ಯ – M R ಕಮಲ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
download yaara haada koralaagi
ಮಾಡು ಸಿಕ್ಕದಲ್ಲಾ / maadu sikkadalla
click to play
ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ
ಜೋಡು ಹೆಂಡರಂಜಿ ಓಡಿ ಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ ।। ಮಾಡು ।।
ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ ।। ಮಾಡು ।।
ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ
ದೊಪ್ಪನೆ ಬಿತ್ತಲ್ಲ ।। ಮಾಡು ।।
ಯೋಗವು ಬಂದಲ್ಲ ಬದುಕು ವಿಭಾಗವಾಯಿತಲ್ಲ
ಭೋಗಿಶಯನ ಶ್ರೀ ಪುರಂದರ ವಿಠಲನ
ಆಗ ನೆನೆಯಲಿಲ್ಲ ।। ಮಾಡು ।।
ಸಾಹಿತ್ಯ – ಪುರಂದರದಾಸರು
ಸಂಗೀತ / ಗಾಯನ – P ಕಾಳಿಂಗ ರಾವ್
ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ / yelliruve kaanisade kareva korale
click to play
ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ
ಎಲ್ಲಿರುವೆ ಹೇಳು ನೀ ನಿಜವೆ ನೆರಳೆ ।।
ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರು
ಎಸೆದ ಕೋಗಿಲೆಯ ದನಿ ಹರಳಿನಂತೆ || ಎಲ್ಲಿರುವೆ ।।
ನಿನಗೆಂದೆ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ
ಓಡಿ ಬಂದೆನು ಇಗೋ ಪರಿವೆ ಇರದೇ
ಓಡಿ ಬರುವಂತೆ ನದಿ ಕಡಲ ಕರೆಗೆ || ಎಲ್ಲಿರುವೆ ।।
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
download yelliruve kaanisade kareva korale
You must be logged in to post a comment.