Category Archives: ಎಚ್. ಕೆ. ನಾರಾಯಣ್
ಹೊಸ ಬಗೆಯಲಿ ಬರಲಿ / hosa bageyali barali
ಹೊಸ ಬಗೆಯಲಿ ಬರಲಿ
ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ತುಳಿದು ಆಳಲಾಗದಂಥ ಬಾಳಿಗೆ
ಕಣ್ಣೆರಡೂ ಉರಿವ ದೀಪಸ್ಥಂಭ
ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಬಾ ಬಾ ಓ ಬೆಳಕೇ / baa baa o belake
click to play
[audio http://cl.ly/1l0e2I1M3v41/Baa_Baa_O_Belake.mp3]ಬಾ ಬಾ ಓ ಬೆಳಕೇ
ಕರುಣಿಸಿ ಇಳಿ ನೆಲಕೆ
ನೀನಿಲ್ಲದೆ ಬಾಳೆಲ್ಲಿದೆ
ಹೋಳಾಗಿದೆ ಬದುಕಿಲ್ಲಿ ।।
ಕಾಡು ಕಡಲು ಬಾನು
ಏನಿದ್ದೂ ಏನು
ಮೈಯೆಲ್ಲಿದೆ ಇಡಿ ಭುವಿಗೆ
ಕಾಣಿಸದಿರೆ ನೀನು ।। ಬಾ ।।
ನಿನ್ನ ಕೃಪಾಚರಣ
ಚಾಚಿ ತನ್ನ ಕಿರಣ
ಸೋಕಿದೊಡನೆ ಸಂಚರಿಸಿದೆ
ನೆಲದೆದೆಯಲಿ ಹರಣ ।। ಬಾ ।।
ಬಾಂದಳದಾ ತಿಲಕವೇ
ವಿಶ್ವದೆದೆಯ ಪದಕವೇ
ನಿನ್ನೊಳಗಿನ ಸತ್ಯ ತೋರು
ಬಂಗಾರದ ಫಲಕವೇ ।। ಬಾ ।।
ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ – ಸುಲೋಚನ
ವಿಶ್ವ ವಿನೂತನ ವಿದ್ಯಾ ಚೇತನ / vishwa vinootana vidya chethana
click to play
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।
ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುoಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ || ವಿಶ್ವ ।।
ಗoಗ ಕದoಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ || ವಿಶ್ವ ।।
ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವೊಲ ಮಲೆ ಕರೆ ಸುoದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆಯೈಸಿರಿ
ಸಾರೋದಯ ಧಾರಾ ನಗರಿ || ವಿಶ್ವ ।।
ಅರಿವೆ ಗುರುನುಡಿ ಜ್ಯೋತಿರ್ಲಿoಗ
ದಯವೇ ಧರ್ಮದ ಮೂಲ ತರoಗ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ || ವಿಶ್ವ ।।
ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ಎಚ್. ಕೆ. ನಾರಾಯಣ್
ಗಾಯನ – ಸಮೂಹ
download vishwa vinootana vidya chethana
ನಿನ್ನ ಕನಸುಗಳಲ್ಲಿ/ninna kanasugalalli
click to play
ನಿನ್ನ ಕನಸುಗಳಲ್ಲಿ ಮುಳುಗಿ ಹೋದೆನು ನಾನು
ಎತ್ತಿ ಕಾಪಾಡುವರು ಯಾರು?
ಸವಿನೆನಪಿನಾಳದಲಿ ಹುದುಗಿ ಹೋಗಿರುವೆನು
ಅಗೆದು ತೆಗೆಯುವರಿಲ್ಲವೇನು? ||ನಿನ್ನ ಕನಸು||
ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನನ್ನು
ಹಿಡಿದು ನಿಲ್ಲಿಸುವವರು ಯಾರು
ಕ್ರೂರ ವಿರಹಾಗ್ನಿಯಲಿ ಬೇಯುತಿರುವೆನು ನಾನು
ನೀರೆರೆದು ಉಳಿಸುವರು ಯಾರು ||ನಿನ್ನ ಕನಸು||
ಬಾ ಇನಿಯ ನೀ ನನ್ನ ಪ್ರೀತಿಯಾಳಗಳಲ್ಲಿ
ಇಳಿದು ತಳ ತೋರು ನೋಡೋಣ
ಮುಗಿಲ ಹಾಯುವ ನನ್ನ ಪ್ರೀತಿ ಗಿರಿ ಶಿಖರಗಳ
ತುದಿ ತನಕ ಏರು ನೋಡೋಣ ||ನಿನ್ನ ಕನಸು||
ಸಾಹಿತ್ಯ- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ- ಎಚ್. ಕೆ. ನಾರಾಯಣ್
ಗಾಯನ-ಬಿ. ಆರ್. ಛಾಯಾ
download ninna kanasugalalli